Sunday, December 5, 2010

ಒಂದು ಐತಿಹಾಸಿಕ ಚುನಾವಣಾ ಫಲಿತಾಂಶದ ಸುತ್ತ. .


ಒಂದು ಐತಿಹಾಸಿಕ ಚುನಾವಣಾ ಫಲಿತಾಂಶದ ಸುತ್ತ. .
‘ಕರ್ನಾಟಕಕಕ್ಕೆ ಬಿಹಾರ ಮಾದರಿಯಾಗಲಿ’
ಎಂದು ಎರಡು ವರ್ಷಗಳ ಹಿಂದೆ ಯಾರಾದರೂ ಹೇಳಿದ್ದರೆ, ಕನ್ನಡಿಗರು ಅಂತಹವರನ್ನು ಅಟ್ಟಿಸಿಕೊಂಡು ಹೋಗಿ ಹೊಡೆಯುತ್ತಿದ್ದರೇನೋ? ಆದರೆ ಕಳೇದ ಮೂರ್‍ನಾಲ್ಕು ದಿನಗಳಲ್ಲಿ ರಾಜ್ಯದಲ್ಲಿ ಸಾರ್ವಜನಿಕ ನಿಟ್ಟುಸಿರಿನ ರೂಪದಲ್ಲಿ ಈ ಮಾತು ಹೊರಬೀಳುತ್ತಿದೆ. ಬಿ.ಎಸ್. ಯಡಿಯೂರಪ್ಪನವರಿಗೆ ಜೀವದಾನ ಸಿಕ್ಕಿದ ದಿನವೇ ಬಿಹಾರ ವಿಧಾನ ಸಭೆಯ ಚುನಾವಣಾ ಫಲಿತಾಂಶ ಪ್ರಕಟವಾಗದೆ ಇದ್ದಿದ್ದರೆ ಬಹುಶಃ ಜನ ಈ ಎರಡು ರಾಜ್ಯಗಳನ್ನು ಜತೆಯಲ್ಲಿ ನಿಲ್ಲಿಸಿ ಹೋಲಿಕೆ ಮಾಡಿಕೊಳ್ಳುತ್ತಿರಲಿಲ್ಲವೇನೋ? ಒಂದೆಡೆ ಬಿಹಾರದ ಮುಖ್ಯ ಮಂತ್ರಿ ನಿತೀಶ್ ಕುಮಾರ್ ವಿಧಾನಸಭಾ ಚುನಾವಣೆಯಲ್ಲಿ ಲಾಲು ಪ್ರಸಾದ್ ಕಟ್ಟಿ ಬೆಳೆ ಸಿದ್ದ ಜಾತಿ ಕೋಟೆಯನ್ನು ಭೇದಿಸಿ ಅಭೂತ ಪೂರ್ವ ಗೆಲುವು ಸಾಧಿಸಿದ್ದಾರೆ. ಇನ್ನೊಂದೆಡೆ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಜಾತಿಯನ್ನು ಬಳಸಿಕೊಂಡು ಕುರ್ಚಿ ಉಳಿಸಿಕೊಂಡಿದ್ದಾರೆ. ಯಾರು ಯಾರಿಗೆ ಮಾದರಿಯಾಗಬೇಕು ಎನ್ನುವುದನ್ನು ಬಿಡಿಸಿ ಹೇಳುವ ಅಗತ್ಯ ಇದೆಯೇ?
ಬಿಹಾರಕ್ಕೆ ಹೆಮ್ಮೆಪಟ್ಟುಕೊಳ್ಳುವ ಇತಿಹಾಸ ಇದೆ. ಗೌತಮ ಬುದ್ಧ. ಮಹಾವೀರ. ಗುರು ಗೋವಿಂದ ಸಿಂಗ್ ಮೊದಲಾದ ಸಮಾಜ ಸುಧಾರಕರೆಲ್ಲಾರೂ ಹುಟ್ಟಿದ ನಾಡು ಅದು. ಆದರೆ ಆ ಸಮಾಜ ಸುಧಾರಕರ ಅನುಯಾಯಿಗಳ ಪರಂಪರೆ ಆ ರಾಜ್ಯದಲ್ಲಿ ಮುಂದುವರಿದುಕೊಂಡು ಬರಲಿಲ್ಲ. ಬೌದ್ಧ, ಜೈನ ಇಲ್ಲವೇ ಸಿಕ್ಖರನ್ನು ಬಿಹಾರದಲ್ಲಿ ಭೂತಗನ್ನಡಿ ಇಟ್ಟುಕೊಂಡು ಹುಡುಕಾಡಬೇಕು. ಅಲ್ಲಿನ ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ನಿರ್ಣಾಯಕರೆನಿಸಿಕೊಂಡ ಭೂಮಿಹಾರ, ರಜಪೂತ, ಯಾದವ, ಕುರ್ಮಿ, ಕೊಯಿರಿಗಳ್ಯಾರು ಬುದ್ಧ-ಮಹಾವೀರರ ಅನುಯಾಯಿಗಳಲ್ಲ. ಕರ್ನಾಟಕದ ಪರಿಸ್ಥಿತಿ ಬಿಹಾರಕ್ಕಿಂತ ಭಿನ್ನ. ಹನ್ನೇರಡನೇ ಶತಮಾನದಲ್ಲಿ ಬಸವಣ್ಣನವರ ನಾಯಕತ್ವದಲ್ಲಿ ನಡೆದ ಧಾರ್ಮಿಕ ಚಳವಳಿ ಕೇವಲ ಇತಿಹಾಸವಾಗಿ ಉಳಿಯದೆ ಅದು ಧಾರ್ಮಿಕ ಪರಂಪರೆಯಾಗಿ ಮುಂದುವರಿದುಕೊಂಡು ಬಂದಿದೆ. ಜಾತಿನಾಶದ ಉದ್ದೇಶ ಹೊಂದಿದ್ದ ಬಸವ ಚಳವಳಿ ಅಂತಿಮವಾಗಿ ಇನ್ನೊಂದು ಜಾತಿಯಾಗಿ ಕೊನೆಗೊಂಡ ವಿಪರ್‍ಯಾಸ ನಡೆದರೂ ಕರ್ನಾಟಕದ ಹಿಂದೂ ಗುಂಪಲ್ಲಿರುವ ಅತೀ ದೊಡ್ಡ ಜಾತಿಯ ಜನರಿಗೆ ಬಸವಣ್ಣನವರೇ ಧಾರ್ಮಿಕ ಗುರು. ಬಸವ ಚಳವಳಿಯ ಉಪ ಉತ್ಪನ್ನವಾದ ವಚನಗಳು ಒಳ್ಳೆಯ ಮನುಷ್ಯರ್‍ಆಗಬೇಕೆಂದು ಅಂದು ಕೊಂಡವರೆಲ್ಲರ ಪಾಲಿನ ಸಂವಿಧಾನದಂತಿವೆ.
ಆದರೆ ಎಂತಹ ವಿಪರ್ಯಾಸ? ಕರ್ನಾಟಕಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಅನಕ್ಷರಸ್ಥರು, ಬಡವರು, ನಿರುದ್ಯೋಗಿಗಳನ್ನು ಹೊಂದಿರುವ ರಾಜ್ಯ ಬಿಹಾರ. ಆ ರಾಜ್ಯದ ಜನಸಂಖ್ಯೆಯಲ್ಲಿ ಶೇಕಡಾ ೧೫ ರಷ್ಟಿರುವ ಯಾದವರ ಏಕೈಕ ನಾಯಕರಾಗಿದ್ದವರು ಲಾಲುಪ್ರಸಾದ್. ಮೈ ತುಂಬಾ ಹೊಲಸು ಮಾಡಿಕೊಂಡ ಭ್ರಷ್ಟಾಚಾರದ ಆರೋಪಗಳೇನೇ ಇದ್ದರೂ ಶ್ರೇಣೀ ಕೃತ ಸಾಮಾಜಿಕ ವ್ಯವಸ್ಥೆಯಲ್ಲಿ  ಕೆಳಮೆಟ್ಟಿಲಲ್ಲಿದ್ದ ಯಾದವ ಸಮುದಾಯಕ್ಕೆ ಆತ್ಮಗೌರವವನ್ನು ತಂದುಕೊಟ್ಟವರು ಲಾಲು. ಅಂತಹ ನಾಯಕನನ್ನು ಅವರ ಜಾತಿಯ ಜನರೆ ಒಂದಲ್ಲ ಎರಡೂ ಚುನಾವಣೆಯಲ್ಲಿ ತಿರಸ್ಕರಿಸಿ ಮೂಲೆಗುಂಪು ಮಾಡಿಬಿಟ್ಟರು. ಬಿಹರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸುಶಿಕ್ಷಿರಿರುವ ಕರ್ನಾಟಕದಲ್ಲಿ ನಡೆದದ್ದು ಇದಕ್ಕೆ ತದ್ವಿರುದ್ದವಾದದ್ದು ಜಾತ್ಯತೀತ ಸಮಾಜ ನಿರ್ಮಾಣದ ಕನಸು ಕಂಡ ಮತ್ತು ಸ್ವಂತ ಶ್ರಮ ಇಲ್ಲದ ಸಂಪತ್ತು ಅಮೇಧ್ಯಕ್ಕೆ ಸಮಾನ ಎಂದು ತಿರಸ್ಕರಿಸಿದ ವಚನಕಾರರ ಪರಂಪರೆಯ ವೀರಶೈವ ಸ್ವಾಮಿಗಳೇ ಗೋಣೂ ಮುರಿಯುವಷ್ಟು ಭಾರದ ಭ್ರಷ್ಟಾಚಾರದ ಹೊರೆ ಹೊತ್ತುಕೊಂಡಿರುವ ಯಡಿಯೂರಪ್ಪನವರನ್ನು ಜಾತಿ ಹೆಸರಲ್ಲಿ ಸಮರ್ಥಿಸಲು ಬೀದಿಗಿಳಿದು ಬಿಟ್ಟರು.
ಒಂದರ್ಥದಲ್ಲಿ ಭ್ರಷ್ಟ ರ್‍ಆಜಕಾರಣಿಗಳೆಲ್ಲರೂ ‘ಜಾತ್ಯಾತೀತ’ರು, ಅವರಲ್ಲಿ ಪ್ರಾಮಾಣಿಕವಾದ ಜಾತಿ ಪ್ರೀತಿ ಇರುವುದೇ ಇಲ್ಲ.
ತಾವೂ ಬದುಕುಳಿಯಲು ಅವರು ಜಾತಿಯ ದುರ್ಬಳಕೆ ಮಾಡಿಕೊಳ್ಳುತ್ತಾರೆ. ಲಾಲು ಪ್ರಸಾದ್ ಮಾಡಿದ್ದು ಇದನ್ನೇ. ಯಡಿಯೂರಪ್ಪನವರು ಮಾಡುತ್ತಿರುವುದು ಕೂಡಾ ಇದನ್ನೇ ಜಾತಿ ಕಾರಣಕ್ಕಾಗಿ ಒಬ್ಬರನ್ನು ಪ್ರೀತಿಸುವುದು ಎಷ್ಟು ಕೆಟ್ಟದೋ, ಕೇವಲ ಜಾತಿ ಕಾರಣಕ್ಕಾಗಿ ಒಬ್ಬರನ್ನು ದ್ವೇಷಿಸುವುದು ಕೂಡಾ ಅಷ್ಟೇ ಕೆಟ್ಟದ್ದು. ಇದನ್ನು ಮೊದಲು ಅರ್ಥಮಾಡಿಕೊಂಡವರು ನಿತೀಶ್ ಕುಮಾರ್. ಅವರ ಇಂದಿನ ಯಶಸ್ಸಿಗೆ ಇದೂ ಒಂದು ಕಾರಣ. ಲಾಲೂ ಪ್ರಸಾದ್ ಅವರು ಮಾತ್ರ ತನ್ನ ರಾಜಕೀಯ ವಿರೋಧಿ ಎಂಬ ನಿರ್ಧಾರಕ್ಕೆ ಬಂದ ನಿತೀಶ್, ಯಾದವ ಸಮುದಾಯವನ್ನು ದ್ವೇಶಿಸಲು, ಮೂಲೆಗುಂಪು ಮಾಡಲು ಹೋಗಲಿಲ್ಲ. ಯಾದವರಿಗೂ ಸಂಪುಟದಲ್ಲಿ ಸ್ಥಾನಮಾನ ನೀಡಿದರು. ಆ ಜಾತಿಯಲ್ಲಿರುವ ಸಜ್ಜನರನ್ನು ಪಕ್ಕದಲ್ಲಿಟ್ಟುಕೊಂಡೇ ಲಾಲು ಪ್ರಸಾದ್ ಅವರನ್ನು ಏಕಾಂಗಿಯನ್ನಾಗಿ ಮಾಡಿದರು. ಅಷ್ಟೇ ಅಲ್ಲ, ಅವರು ದ್ವೇಷದ ರಾಜಕಾರಣಕ್ಕೂ ಇಳಿಯಲಿಲ್ಲ. ನಿತೀಶ್ ಮೊದಲ ಬಾರಿ ಅಧಿಕಾರಕ್ಕೆ ಬಂದಾಗ ಲಾಲು ಪ್ರಸಾದ್ ಆಡಳಿತದ ಅವಧಿಯ ಅಕ್ರಮಗಳ ತನಿಖೆಗಾಗಿ ಆಯೋಗ ನೇಮಿಸಬೇಕೆಂಬ ಒತ್ತಡ ಇತ್ತು. ಆ ರೀತಿ ಸಲಹೆ ಕೊಟ್ಟವರತ್ತ ನಿತೀಶ್ ಸುಮ್ಮನೆ ಕಿರುನಗೆ ಸೂಸಿ ಮಾತು ಬದಲಿಸುತ್ತಿದ್ದರಂತೆ. ತನಿಖಾ ಆಯೋಗಗಳು ಇನ್ನಷ್ಟು ರಾಜಕೀಯ ದ್ವೇಷದವನ್ನು ಹುಟ್ಟುಹಾಕಬಹುದೇ ವಿನಾ ತಪ್ಪಿತಸ್ಥರನ್ನು ಶಿಕ್ಷಿಸಲು ನೆರವಾಗಲಾರದು ಎಂಬ ವಾಸ್ತವ ನಿತೀಶ್ ಗೆ ಗೊತ್ತಿತ್ತು. ಯಡಿಯೂರಪ್ಪನವರು ಈಗಾಗಲೇ ಹದಿನಾರು ವರ್ಷಗಳ ಅವಧಿಯ ರಾಜಕೀಯ ಅಕ್ರಮಗಳ ತನಿಖೆಗೆ ಹೊರಟಿದ್ದಾರ್‍ಎ, ಇನ್ನೂ ಯಾರಾದರೂ ಕುಟುಕಿದರೆ ರಾಜ್ಯದ ಮೊದಲ ಮುಖ್ಯಮಂತ್ರಿಯ ಆಡಳಿತಾವಧಿಯಿಂದಲೇ ತನಿಖೆಗೆ ಆದೇಶ ನೀಡಿದರೂ ಅಚ್ಚರಿಯೇನಿಲ್ಲ. ಹೋಲಿಕೆ ಮಾಡದಿರುವುದು ಹೇಗೆ? 

Thursday, November 11, 2010

ರಾಜ್ಯ ಬಿಜೆಪಿ ಯಲ್ಲಿಮಂಡ್ಯ ನಾಗರಾಜಪ್ಪನವರ ಪಾತ್ರ

                       ರಾಜ್ಯ  ಬಿಜೆಪಿ ಯಲ್ಲಿಮಂಡ್ಯ ನಾಗರಾಜಪ್ಪನವರ ಪಾತ್ರ

                 ಕರ್ನಾಟಕದಲ್ಲಿ ಭಾರತಿಯ ಜನತಾಪಕ್ಷವನ್ನು ಅದಿಕಾರಕ್ಕೆ ತರಲು ಪ್ರಮುಖಕಾರಣಕರ್ತರಾದ ಬಿಎಸ್ ಯಡಿಯೂರಪ್ಪನವರ ಸತತ ೩೫ವರ್ಷಗಳಿಂದ ಅಬಿರತ ಶ್ರಮದ ನಂತರ ಅದಿಕಾರಕ್ಕ ಬರಲು ಬಿಎಸ್ ಯಡಿಯೂರಪ್ಪನವರ ಶ್ರಮ ಅಶ್ಟಿಷ್ಟಲ್ಲ. ಕರ್ನಾಟಕದಲ್ಲಿ ಎಲ್ಲ ಬಾಗಗಳಲ್ಲೂ ಬಿಜೆಪಿಯು ಸದ್ರುಡಗೊಂಡಿರುವಂತೆ ಅವರ ತವರು ಜಿಲ್ಲೆಯಾದ ಮಂಡ್ಯದಲ್ಲೂ ಬಿಜೆಪಿಯನ್ನು ಬಲಪಡಿಸಲು ನಾಗರಾಜಪ್ಪರವರಂತ ಪ್ರಾಮಾಣಿಕ ಕಾರ್ಯಕರ್ತರನ್ನ ಮುಂಚೂಣಿಯಲ್ಲಿ ತಂದು ಮಂಡ್ಯಜಿಲ್ಲಾ ಬಿಜೆಪಿ ಘಟಕವು ಪ್ರಬಲಗೊಳ್ಳುವಂತೆ ಮಾಡಿದ್ದಾರೆ .
ಮಂಡ್ಯಜಿಲ್ಲೆಯ ಮಳವಳ್ಳಿ ತಾಲುಕಿನ ಚಿಕ್ಕಮುಲಗೂಡು ಗ್ರಾಮದ ಜಿಮಿನ್ದಾರರರಾದ ಬಸವರಾಜಪ್ಪ ಮತ್ತು ಚಿಕ್ಕತಾಯಮ್ಮನವರ ಮಗನಾದ ಶ್ರಿಯುತ ನಾಗರಾಜಪ್ಪನವರು ಖ್ರುಷಿಯಲ್ಲಿ ಬಿಎಸ್ಸಿ ಪದವಿಯನ್ನು ಪಡದಿದ್ದಾರೆ  ಇವರು ಮುಲತಃ ಅರೆಸ್ಸಸ್ಸ್ ಕಾರ್ಯಕರ್ತರಾಗಿದ್ದು ಪ್ರಾರಂಬದಿಂದಲೂ ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತರಾಗಿ ಸೇವೆಸಲ್ಲಿಸಿದ್ದಾರೆ . ಇವರು ಪ್ರಾರಂಬದಲ್ಲಿ
"ಬಸವ" ಸಮಿತಿಯ ಅದ್ಯಕ್ಷರಾಗಿ ಹಲವಾರು ರೀತಿಯ ಸಮಾಜ ಸೇವಾ ಕಾರ್ಯಕ್ರಮಗಳಮೂಲಕ ಜನತ ಸೇವೆಯನ್ನು ಮಾಡಿಕೊಂಡು ಬಂದಿರುತ್ತಾರೆ ಅಲ್ಲದೆ ಮೈಶುಗರ್ ಕಾರ್ಖನೆಯಲ್ಲಿ ಖೇನ್ ಸುಪರ್ಡೆಂಟಾಗಿ ಪ್ರಮಾಣಿಕ ಸೇವೆ ಸಲ್ಲಿಸಿರುತ್ತಾರೆ . ಇವರು ಮಂಡ್ಯಜಿಲ್ಲೆಯ ಕೆರಗೂಡು ವಿದಾನಸಭಾ ಕ್ಷೇತ್ರದಿಂದ ಎರಡುಬಾರಿ ವಿದಾನಸಭೆಗೆ ಸ್ಪರ್ದಿಸಿ ಪರಬವಗೊಂಡರು ಸಹ ಎದೆಗುಂದದೆ ಬಿಜೆಪಿಯ ಮತ್ತೊಂಬ್ಬ ನಾಯಕರಾದ ರಾಮಲಿಂಗಯ್ಯನವರ ಜೋತೆ ಜೋಡಿಈತಿನಮ್ತೆ ದುಡಿದು ಜಿಲ್ಲಿಯಲ್ಲಿ ಪಕ್ಷವನ್ನ ಕಟ್ಟಲು ಶ್ರಮಿಸಿದ್ದಾರೆ.
ಕಿರುಗಾವಲು ಹೋಬಳಿಯ ಸುತ್ತಮುತ್ತಲ ಗ್ರಾಮಪಂಚಾಯಿತಿಗಳಲ್ಲಿ ಬಿಜೆಪಿಯು ಅದಿಕಾರಕ್ಕೆ ಬರಲು ನಾಗರಾಜಪ್ಪನವರು ಪ್ರಮುಖಕಾರಣಕರ್ತರಾಗಿದ್ದು ಪ್ರಪ್ರಥಮವಾಗಿ ಚಿಕ್ಕಮೂಲಗೂಡು ತಾಲುಕು ಪಂಚಾಯಿತಿ ಉಪಚುನಾವಣೆಯಲ್ಲಿ ಬಿಜೆಪಿ ಅಬ್ಯಾರ್ಥಿಯನ್ನ ಜಯಗೂಳಿಸುವಂತೆ ಮಾಡಲು ಇವರು ಪಟ್ಟ ಶ್ರಮ ಅಪಾರವಾದುದು. ಅದೇ ರಿತಿಯಲ್ಲಿ ಅಪರೇಷನ್ ತಾಲುಕುಪಂಚಾಯಿತಿ ಮೂಲಕ ಶ್ರೀರಂಗಪಟ್ಟಣ ತಾಲಿಕು ಪಂಚಾಯಿತಿಯಲ್ಲಿ ಬಿಜೆಪಿಯು ಅದಿಕಾರ ಇಡಿಯುಲು ನಾಗರಾಜಪ್ಪನವರು ಪ್ರಮುಖ ಕಾರಣಕರ್ತರಾಗಿದ್ದಾರೆ
ಮಂಡ್ಯಜಿಲ್ಲೆಯ ಕಿರುಗಾವಲು ಕ್ಷೇತ್ರದಿಂದ ಶಾಸಕರಾಗಿ ಅಯ್ಕೆಯಾಗಿದ್ದ ದೇವಗೌಡರ ಬೀಗರಾದಂತಹ ಡಿಸಿತಮ್ಮಣ್ಣನವರು ಅನೇಕ ಅಬಿವೃದ್ದಿಕಾರ್ಯಕ್ರಮಗಳ ಮೂಲಕ ಜನಮನ್ನಣೆಯನ್ನು ಗಳಿಸಿದ್ದರೂ ಸಹ ಮುಂದಿನ ಚುನಾವಣೆಯಲ್ಲಿ ಮದು-ಮಾದೆಗೌಡರಿಗಾಗಿ ಕಿರುಗಾವಲು ಕ್ಷೇತ್ರವನ್ನು ಬಿಟ್ಟುಕೊಟ್ಟು ಎಸ್ ಎಮ್ ಕ್ರಿಷ್ಣರವರ ಸ್ವಕ್ಷೇತ್ರವಾದ ಮದ್ದೂರಿನಿಂದ ಸ್ಪರ್ದಿಸಿದ್ದ ಡಿ ಸಿ ತಮ್ಮಣ್ಣರವರನ್ನು ಕಾಂಗ್ರೇಸ್ ಪಕ್ಷದವರಾದ ಎಸ್ ಎಮ್ ಶಂಕರ್ (ಎಸ್ ಎಮ್ ಕ್ರಿಷ್ಣ ರವರ ತಮ್ಮ) ಮತ್ತು ಅವರ ಪುತ್ರರಾದ ಮಾಜಿ ಜಿಲ್ಲಾಪಂಚಾಯಿತಿ ಅದ್ಯಕ್ಷ ಗುರುಚರಣ್ ಹಾಗು ಅವರ ಬೆಂಬಲಿಗ  ಕಾಂಗ್ರೇಸ್ ಮುಖಂಡರಗಳ ಚಿತಾವಣಿಯಿಂದ  ಡಿಸಿ ತಮ್ಮಣ್ಣನವರು ಸೋಲುಣ್ಣಬೇಕಾಯಿತು . ಇಂತಹ ಕುತಂತ್ರಗಳಿಂದ ಬೇಸತ್ತಿದ್ದ ಡಿಸಿತಮ್ಮಣ್ಣನವರನ್ನು ಸೂಕ್ತ ಸಮಯದಲ್ಲಿ ಕಾರ್ಯಪರವೃತ್ತರಾದ ನಾಗರಾಜಪ್ಪನವರು ಡಿಸಿತಮ್ಮಣ್ಣನವರನ್ನು ಬಿಜೆಪಿಗೆ ಕರತರುವಲ್ಲಿ ಯಶಸ್ವಿಯಾದರು ಇವರು ಮಾತ್ರವಲ್ಲದೆ ಮಂಡ್ಯ ಜಿಲ್ಲೆಯ ಇನ್ನೂ ಅನೇಕ ಮುಖಂಡರುಗಳನ್ನು  ಪಕ್ಷಕ್ಕೆ  ಕರತರುವಲ್ಲಿ ನಾಗರಾಜಪ್ಪನವರು ಪ್ರಮುಖ ಕಾರಣಕರ್ತರು. ಇವರಲ್ಲಿ ಪ್ರಮುಖರು ಮಂಡ್ಯಜಿಲ್ಲೆಯ ನಾಗಮಂಗಲ ತಾಲುಕಿನಲ್ಲಿ ಎರಡು ಬಾರಿ ಶಾಸಕಾರಗಿ ಅಯ್ಕೆಯಾಗಿದ್ದು ಸಚಿಚರೂ ಅಗಿದ್ದಂತಹ ಎಲ್ ಅರ್ ಶಿವರಾಮೆಗೌಡ. ಕೆರಗೂಡು ಕ್ಷೇತ್ರದಿಂದ ಒಂದು ಬಾರಿ ಶಾಸರಾಗಿ ಅಯ್ಕೆಯಾಗಿದ್ದಂತಹ ಜಿ ಬಿ ಶಿವಕುಮಾರ್, ಉದ್ದಮಿಯೂ ರಾಜಕಾರಣಿಯೂ ಅಗಿದ್ದಂತಹ ದಿ: ನಾಗಣ್ಣನವರ ಪತ್ನಿಯಾದ ವಿದ್ಯನಾಗೇಂದ್ರ, ನಗುವಿನಹಳ್ಳಿ ನಂದಕುಮಾರ್, ಪಾಲಹಳ್ಳಿ ಚಂದ್ರಶೇಖರ್ , ಕೆ ಅರ್ ಪೇಟೆ ಮಾಜಿ ತಾಲ್ಲುಕು ಪಂಚಾಯಿತಿ ಅದ್ಯಕ್ಷರಾದ ಈಶ್ವರ ಪ್ರಾಸದ್, ಪ್ರೇಮ ಯುವರಾಜ್  ಇನ್ನೂ ಮುಂತಾದವರನ್ನು ಪಕ್ಷಕ್ಕೆ ಕರೆತರುವಲ್ಲಿ ನಾಗರಾಜಪ್ಪನವರ ಪಾತ್ರ ಅಪಾರವಾದುದು. 

ಮಂಡ್ಯಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸಲು ಇಷ್ಟೆಲ್ಲ ಶ್ರಮವಹಿಸಿರುವ ನಾಗರಾಜಪ್ಪನವರನ್ನು ಮಾನ್ಯ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ರೋಗಗ್ರಸ್ತ ಮಾತ್ರವಲ್ಲದೆ ಗುಜರಿಗೆ ಮಾರಟ ಮಾಡಬೇಕಿದ್ದ ಮೈಶುಗರ್ ಸಕ್ಕರೆ ಕಾರ್ಖಾನೆಗೆ ಅದ್ಯಕ್ಷರನ್ನಾಗಿ ನೇಮಿಸಿ ಅದನ್ನು ಪುನಃಶ್ಚೇತನ ಗೊಳಿಸುವ ಜವಾಬ್ದಾರಿಯನ್ನು ವಹಿಸಿದರು ಈ ಉದ್ದಎಯನ್ನು ಸವಾಲಾಗಿ ಸ್ಪೀಕರಸಿದ ನಾಗರಾಜಪ್ಪನವರು ಗ್ರಾಮ ವಾಸ್ತವ್ಯ ಊಡುವ ಮೂಲಕ ಗ್ರಾಮಗಳಲ್ಲಿ ಸರಣಿ ಸಭೆ ನೆಡೆಸುವ ಮೂಲಕ ರೈರತ ಮನವೋಲಿಸಿ ಕೇವಲ ೮೦ಸಾವಿರ ಟೆನ್ ಕಬ್ಬು ಸರಬರಾಜು ಆಗುತ್ತಿದ್ದ ಪ್ರಮಾಣವನ್ನು ಕೆಲವೇ ದಿನಗಳಲ್ಲಿ ಸರಿ ಸುಮಾರು ೮ ಲಕ್ಷಟೆನ್ ಗಳಿಗೆ ಏರಿಸಿರುವುದು ಪವಾಡವೇ ಸರಿ. ಕಾರ್ಖಾನೆಯಲ್ಲಿ ತಯಾರಾಗುವ ಮೊಲೆಸಸ್ಸ್ ನ್ನು ಮದ್ಯ ತಯಾರಿಕರಿಗೆ ಕಡಿಮೆ ಬೆಲೆಗೆ ಮಾರಾಟವಾಗುವುದನ್ನು ಮನಗಂಡು ಮೈರಮ್, ಮೈವಿಸ್ಕಿ, ಮೈಬ್ರಾಂದಿ ಮುಂತಾದುವುಗಳನ್ನು ತಾಯಾರು ಮಾಡಿವಲ್ಲಿ ಯಶಸ್ವಿಯಾಗುವುದಲ್ಲದೆ ಕಾರ್ಖನೆ ಹೆಚ್ಚು ಹೆಚ್ಚು ಲಾಭ ಬರುವಂತೆ ಮಾಡಿದರು. ಪ್ರತಿ ವರ್ಷ ಕಾರ್ಖಾನೆಯಲ್ಲಿ ದೊರೆಯುವ ಗುಜರಿ ವಸ್ತುಗಳನ್ನು ಹಳೆಯ ಆಡಳಿತ ಮಂಡಳಿಯು ಕೇವಲ ೩೦ಲಕ್ಷರೂ ಗಳಿಗೆ ಮಾರುತ್ತಿದ್ದು. ಇವರು ಅದಿಕಾರ ವಹಿಸಿಕೊಂಡ ನಂತರ ಅದೇ ವಸ್ತುಗಳನ್ನು ೭೩ ಲಕ್ಷಕ್ಕೆ ಮಾರ‍ಾಟವಾಗುವಂತೆ ಮಾಡಿದರು. ಹಳೆಯ ಆಡಳಿತಮಂಡಳಿಯು ಕಾರ್ಖಾನೆ ಸರ್ಬರಾಜು ಅಗುತ್ತಿದ್ದ ಪ್ರತಿ ಟೆನ್ ಸೌದೆಯನ್ನು ೧೮೫೦ ರೂಗಳಿಗೆ ಖರೀದುಸುತ್ತಿದ್ದು ಇವರ ಅದಿಕಾರದ ನಂತರ ಕೇವಲ ೧೨೦೦ ರೂಗಳಿಗೆ ಖರೀದಿಸುವಂತಾಯುತು ಮಾತ್ರ ವಲ್ಲದೆ ಇದರಿಂದ ಕಾರ್ಖನೆ ಪ್ರತಿವರ್ಷ ಕೋಟ್ಯಂರ ರೂಗಳು ಸೋರಿವೊಗುವದನ್ನು ತಡೆದರೂ ಕಾರ್ಖಾನೆಯ ವ್ಯಾಪ್ತಿಯಲ್ಲಿ ಪಾಡುಬಿದ್ದಿದ್ದ, ಕೇವಲ ಸಭೆ-ಸಮಾರಂಭಗಳಿಗೆ ಉಪಯೋಗಿಸುತ್ತಿದ್ದ ಕಾವೇರಿಮಾತೆ ಉದ್ಯಾನವನವನ್ನು ಕೋಟ್ಯಂತರ ರೂಗಳನ್ನು ಖರ್ಚುಮಾಡಿ ಅಬಿವೃದ್ದಿ ಪಡಿಸಿದ್ದು ಮಾತ್ರವಲ್ಲದೆ ನಾಲ್ವಡಿ ಕ್ರಿಷ್ಣರಾಜ ಒಡೆಯರ್ ಮತ್ತು ಕೋಲ್ಮನ್ ರವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಹಿಂದೆ ಕಾರ್ಖನೆಯಲ್ಲಿ ತಯಾರಾಗುತ್ತಿದ್ದ ಸಕ್ಕೆರೆಯ ಗುಣಮಟ್ಟವು ಖಳಪೆಯಾಗಿದ್ದು ಕಂದುಬಣ್ಣದಿಂದ ಕೂಡಿರುತ್ತಿದ್ದು. ಇವರ ಅದಿಕಾರದ ನಂತರ ಉತ್ತಮ ಗುಣಮಟ್ಟದ ಅಚ್ಚ ಬಿಳಿಸಕ್ಕರೆಯು ತಯಾರಾಗುವಂತೆ ಮಾಡುವಲ್ಲಿ ಯಶಸ್ವಿಯಾದರು. ಇದರಿಂದ ಸಕ್ಕರೆಯನ್ನು ದೇಶವಿದೇಶಗಲಿಗೆ ರಪ್ಟುಮಾಡಲು ಅನುಕೂಲಕರ್ವಾಗಿದ್ದು, ರೈತರಿಗೆ ಪ್ರತಿಟೆನ್ನಿಗೆ ೧೧೦೦ ರಿಂದ ೧೨೦೦ ರೂಗಳು ಮಾತ್ರ ಪಾವತಿಯಾಗುತ್ತಿತ್ತು ಇವರ ಅದಿಕಾರ ವಹಿಸಿಕೊಂದ ನಂತರ ಪ್ರತಿಟೆನ್ನಿಗೆ ೧೮೦೦ರೂಗಳಷ್ಟು ಬೆಂಬಲ ಬೆಲಯನ್ನು ಕೊಡಲು ಸಾದ್ಯವಾಯಿತು.
ಕಾರ್ಖಾನೆಗೆ ಬೇಕಾಗಿರುವ ವಿದ್ಯುತ್ ನ್ನು ಸ್ವಯಂ ಉತ್ಪಾದಿಸಿಕೊಳ್ಳಲು ಕೋಲ್ಯಾಂಡ ಕಾಮಗಾರಿಯು ಪೋರ್ಣಗೊಂಡಿದ್ದು ಕೋ ಜನರೇಷನ್ ಪ್ರಾರಂಭಕ್ಕೆ ಅಣಿಯಾಗಿದೆ ೧೮ ವರ್ಷದ ಇತಿಹಾಸದಲ್ಲಿ ಕಾರ್ಮಿಕರಿಗೆ ಕಾಲಕಾಲಕ್ಕೆ ವೇತನ ಪಾವತಿ ಮಾಡಲು ಕಷ್ಟವಾಗುತ್ತಿದ್ದಂತಹ ಪರಿಸ್ತಿತಿ ಇತ್ತು ಇವರ ಅದಿಕಾರವದಿಯಲ್ಲಿ ಸರಿಯಾದ ಸಮಯಕ್ಕೆ ವೇತನ ನೀಡುವುದು ಮಾತ್ರವಲ್ಲದೆ ಬೋನಸ್ ಹಣವನ್ನು ಸಹ ಪಾವತಿ ಮಾಡಲಾಗಿದೆ . ಕಾರ್ಖಾನೆಗೆ ಸುಗಮವಾಗಿ ಕಬ್ಬು ಸರಬರಾಜು ಮಾಡಲು ಮಂಡ್ಯಸುತ್ತುಮುತ್ತಲ ಸುಮಾರು ೧೦ ಕಿ.ಮಿ ವ್ಯಾಪ್ತಿಯ ಗ್ರಾಮಗಳಿಂದ ರಸ್ತೆ ನಿರ್ಮಾಣಕ್ಕಾಗಿ ೬೦ಕೋಟಿರೂ ವೆಚ್ಚದಲ್ಲಿ ಕಾಮಗಾರಿ ನೆಡೆಯುತ್ತಿದೆ . 
ಕೇನ್ ಯಾಡ್ ಮತ್ತು ತೋಕದ ಯಂತ್ರ
ಕೇನ್ ಯಾಡ್ ಮತ್ತು ತೋಕದ ಯಂತ್ರವನ್ನು ಎರಡು ಕೋಟಿವೆಚ್ಚದಲ್ಲಿ ಅಬಿವೃದ್ದಿಪಡಿಸಲಾಗಿದೆ ಹಲವಾರು ವರ್ಷಗಳಿಂದ ರೋಗಗ್ರಸ್ತ ಕಾರ್ಖಾನೆಗಳ ಪಟ್ಟಿಯಲ್ಲಿರುವ ಮೈಶುಗರ್ ಸಕ್ಕರೆ ಕಾರ್ಖನೆಯನ್ನು ಮೂರರಿಂದ ಐದು ತಿಂಗಳ ಹೊಳಗೆ ಲಾಭದಾಯಕ ಕಾರ್ಖಾನೆ ಮಾಡುವುದಾಗಿ ನಾಗರಾಜಪ್ಪನವರು ಪಣತೋಟ್ಟೀದ್ದಾರೆ ಬಿಜೆಪಿ ಸರ್ಕಾರವು ಕರ್ನಾಟಕದಲ್ಲಿ ಅದಿಕಾರಕ್ಕೆ ಬಂದ ತದನಂತರದಿಂದ ಒಟ್ಟು ನೂರ ಇಪ್ಪತ್ತಾರು ಕೋಟಿ ರೂಗಳನ್ನು ಮೈಶುಗರ್ ಕಾರ್ಖಾನೆಗೆ ಅನುದಾನವಾಗಿ ನೀಡುವ ಮುಖಾಂತರ ಅರೆಜೀವವಾಗಿದ್ದಕಾರ್ಖಾನೆಯನ್ನು ಪ್ರಗತಿಪತದತ್ತ  ಕೋಂಡುಯ್ಯಲು ನಾಗರಾಜಪ್ಪನವರು ಯಶಶ್ವಿತರಾಗಿದ್ದಾರೆ
ನಾಗರಾಜಪ್ಪನವರ ಅಬಿರತ ಪ್ರಯತ್ನ ದುಡಿತ ಮತ್ತು ಪ್ರಾಮಣಿಕ ಸೇವೆಯಿಂದ ಅಬಿವೃದ್ದಿತ್ತ ದಾಪುಗಾಲಿಡುತ್ತಿರುವ ಮೈಶುಗರ್ ಸಕ್ಕರೆ ಕಾರ್ಖನೆಯು ಪುನಃಶ್ಚೇತನ ಗೊಳ್ಳುವಲ್ಲಿ ಯಾವುದೆ ಸಂಶಯವಿಲ್ಲ ಇದನ್ನು ಮನಗಂಡ ಬಿಜೆಪಿ ಸರ್ಕಾರ ಮತ್ತು ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು ಭಾರತ ಇತಿಹಾಸದಲ್ಲೆ ಪ್ರಪ್ರಥಮವಾಗಿ ಒಬ್ಬ ವ್ಯಕ್ತಿಗೆ ಒಂದೆ ಜಿಲ್ಲೆಯ ಎರಡು ಸಕ್ಕರೆ ಕಾರ್ಖಾನೆಗಳ ವಹಿಸಿಕೊಟ್ಟಿರುವುದು ನಿಜಕ್ಕೂ ಅಶ್ಚರ್ಯವೇ ಸರಿ. ಮಂಡ್ಯ ಜಿಲ್ಲೆಯ ಪಾಂಡುವಪುರ ತಾಲುಕಿನಲ್ಲಿರುವ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಸಹ ನಾಗರಾಜಪ್ಪನವರ ಮಡಿಲಿಗೆ ಹಾಕಿರುವುದು ನಿಜಕ್ಕು ಒಂದು ಉತ್ತಮ ಹಜ್ಜೆಯೇ ಸರಿ. ಕೋಟಾರಿ ಶುಗರ್ ಕಂಪನಿಯವರಿಗೆ ವಹಿಸಿಕೊಟ್ಟಿದ್ದ ಪಿ ಎಸ್ ಎಸ್ ಕೆ ಯನ್ನು ನಿರ್ಮೂಲನೆ ಮಾಡಲು ಹೊರಟಿದ್ದ ಕೋಟಾರಿ ಶುಗರ್ ರವರಿಂದ ಕಾರ್ಖಾನೆ ಮರಳಿ ಪಡೆದು ಇದನ್ನು ಸಹ ಪುನಃಶ್ಚೇತನಗೊಳಿಸುವ ಕಾರ್ಯ ವಹಿಸಿಕೊಂಡ ನಾಗರಾಜಪ್ಪನವರು ಪ್ರಾರಂಭದಲ್ಲಿ ಅದಕ್ಕಾಗಿ ಸರ್ಕಾರದಿಂದ ಸುಮಾರು ಐದು ಕೋಟಿರೂಗಳನ್ನು ಅನುದಾನವನ್ನಾಗಿ ತರುವಲ್ಲಿ ಯಶಸ್ವಿಯಾಗಿದ್ದಾರೆ ಪಿ ಎಸ್ ಎಸ್ ಕೆ ಯ ಪಕ್ಕದಲ್ಲೆ ಇರುವ ಸುಮಾರು ವರ್ಷಗಳಿಂದ ನಿಂತು ಹೋಗಿದ್ದ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಲು ಯಡಿಯೂರಪ್ಪನವರು ಅದಕ್ಕೆ ಸರ್ಕಾರ ದಿಂದ ಮಂಜೂರಾಗ ಬೇಕೊದ್ದ ನುದಾನವನ್ನ ಬಿಡುಗಡೆ ಮಾಡಿ ಕಾಮಗಾರಿಯನ್ನು ಪುನಃ ಪ್ರಾರಂಭಿಸುವದರ ಮೂಲಕ ಸುತ್ತಮುತ್ತಲಿನ ಹಳ್ಳಿಗಳ ರೈತರು ಕಾರ್ಖಾನೆಗೆ ಕಬ್ಬನ್ನು ಸರಾಬರಾಜು ಮಾಡುಲು ಅನುಕೂಲವಾಗುವಂತೆ ಮಾಡಿದರು.

ಮಂಡ್ಯಜಿಲ್ಲಾ ಬಿಎಸ್ ಯಡಿಯೂರಪ್ಪ ಮತ್ತು ನಾಗರಾಜಪ್ಪನವರ ಅಭಿಮಾನಿಗಳ ಸೇವಾ ಸಂಘ.

ಮಂಡ್ಯಜಿಲ್ಲಾ ಬಿಜೆಪಿ ಯುವಘಟಕದ ಪ್ರದಾನ ಕಾರ್ಯದರ್ಶಿಯೂ , ಬಿಜೆಪಿಯ ಯುವನಾಯಕರೂ ಅದ ಜೆತೆಂದ್ರರವರು ಈ ಮಂಡ್ಯಜಿಲ್ಲಾ ಬಿಎಸ್ ಯಡಿಯೂರಪ್ಪ ಮತ್ತು ನಾಗರಾಜಪ್ಪನವರ ಅಭಿಮಾನಿಗಳ ಸೇವಾ ಸಂಘದ ಅದ್ಯಕ್ಷರಾಗಿದ್ದು  ಸಂಘದ ಅಡಿಯಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ಅಮ್ಮಿಕೊಳ್ಳುವುದರ ಮೂಲಕ ಈ ಸಂಘದ ದ್ಯೇಯವನ್ನು ಎತ್ತಿಹಿಡಿದಿದ್ದಾರೆ. ಇವರು ಸಂಘದವತಿಯಿಂದ ಬಿಎಸ್ ಯಡಿಯೂರಪ್ಪ ಮತ್ತು ನಾಗರಾಜಪ್ಪನವರ ಹುಟ್ಟು ಹಬ್ಬದ ದಿನಗಳಲ್ಲಿ ಬಡಜನರಿಗೆ ಹಸುಗಳನ್ನು ಕೊಡಿಸುವುದು, ಎತ್ತಿನಗಾಡಿಗಳನ್ನು ದಾನಮಾಡುವುದು . ಅಂಗವಿಕಲರಿಗೆ ಮೂರು ಚಂಕ್ರದ ಸೈಕಲ್ ಗಳನ್ನು ಕೊಡುವುದು , ಪ್ರಯಾಣಿಕರ ಆಟೊಗಳನು ಮತ್ತು ಗೂಡ್ಸ ಆಟೊಗಳನ್ನು ನೀಡುವುದು ರುದ್ರಾಶ್ರಮಗಳಿಗೆ ಗ್ರೈಂಡರ್ ಮತ್ತು ಚಾಪೆ , ದಿಂಬು , ಬಟ್ಟೆ ಬರೆ ಮುಂತಾದ್ ಗೃಹಪಯೋಗಿ ವಸ್ತುಗಳನ್ನು ಕೊಡುವುದು ಮತ್ತು ಹೃದಯ ಸಂಜೀವಿನು ಅಡಿಯಲ್ಲಿ ಹೃದ್ರ‍ೋಗ ಚಿಕಿಸ್ತೆಗಾಗಿ ಮುಖ್ಯಮಂತ್ರಿ ಪರಿಹಾರ ನಿದಿಯಿಂದ ಜಿಲ್ಲೆಯ ಸುಮಾರು ೨೮೨ ಮಂದಿಗೆ ಸರಿ ಸುಮಾರು ೭೦ ಸಾವಿರ ರೂಗಳ ವರೆಗೊ ಪರಿಹಾರ ಈ ಸಂಘವು ಯಶಸ್ವಿಯಾಗಿದೆ  . ಬಡಜನರ ಮತ್ತು ನಿರ್ಗತಿಕ ಜನರಿಗೆ ವೃದ್ಯಾಪ್ಯವೇತನ ಸಂದ್ಯಾಸುರಕ್ಷ ಯೋಜನೆಡಿಯಲ್ಲಿ ದೊರೆಯುವ ವಿವಿದ ಅನುಕೂಲಗಳನ್ನು ಜನರ ಮನೆಗಳಿಗೆ ತಲುಪುವಂತೆ ಮಾಡಲು ಶ್ರಮಿಸಿದ್ದಾರೆ . ಸುಮಾರು ೯ ಮಂದಿ ಮೂತ್ರಪಿಂಡ ರೊಗದಿಂದ ಬಳಲುವ ಜನರಿಗೂ ಸಹ ಸರ್ಕಾರದಿಂದ ಮತ್ತು ಸಾರ್ವಜನಿಕರಿಂದ ಸಹಾಯ ಮಾಡಿಸುವಲ್ಲಿ ನೆರವಾಗಿದ್ದಾರೆ . ಮತ್ತು ಸರ್ಕಾರದ ಯಶಸ್ವಿ ಕಾರ್ಯಕ್ರಮಗಳಲ್ಲಿ ಒಂದಾದ "ತಿಂಗಳ ನೆಡೆಗೆ ಹಳ್ಳಿಗಳ ಕಡೆಗೆ" ಯನ್ನು ಇವರು "ಸಂಘದ ನೆಡೆಗೆ ನೊಂದವರ ಕಡೆಗೆ " ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಮಂಡ್ಯನಗರದ ಗಾಂದಿನಗರ , ಶುಗರ್ ಟೌನ್, ಕಲ್ಲಳ್ಳಿ ವಿ ವಿ ನಗರ ಸ್ಲಮ್ ಮತ್ತು ಶಂಕರಮಠಗಳಲ್ಲಿ ಯಶಸ್ವಿಯಾಗಿ ನೆಡಸಿದ್ದಾರೆ . ಈ ಸಂಘದ ಸದಸ್ಯತ್ವವು ಉಚಿತವಾಗಿದ್ದು ಈಗಾಗಲೆ ಸುಮಾರು ೯೫೦೦ ಸದಸ್ಯರುಗಳನ್ನು ಒಳಗೊಂಡಿದೆ

SATISH N GOWDA
BANGALORE (CHIKKABALLAPURA)

ಅಖಿಲ ಭಾರತ ಕನ್ನಡ ಸಾಹಿತ್ಯಸಮ್ಮೇಳನದ ಅದ್ಯಕ್ಷರಾಗಿ ಪ್ರೋ ಜಿ,ವೆಂಕಟಸುಬ್ಬಯ್ಯ

 SATISH N GOWDA              
      
          ಅಖಿಲ ಭಾರತ ಕನ್ನಡ ಸಾಹಿತ್ಯಸಮ್ಮೇಳನದ ಅದ್ಯಕ್ಷರಾಗಿ ಪ್ರೋ ಜಿ,ವೆಂಕಟಸುಬ್ಬಯ್ಯ ಮುಂದಿನತಿಂಗಳು ಬೆಂಗಳೂರಿನಲ್ಲಿ ನೆಡೆಯುವ ೭೭ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅದ್ಯಕ್ಷರಾಗಿ ಅಪೂರೂಪದ ಭಾಷ ವಿಗ್ನಾನಿ ಕನ್ನಡ ನಾಡಿನ ಸಾಹಿತ್ಯ , ಸಾಸೃತಿಕ ಲೋಕದ ಧಿಮಂತ ಚೇತನ ವಿದ್ವಾಂಸ ಹಾಗು ನಿಗಂಟು ತಗ್ನ ಪ್ರೋ, ಜಿ, ವೆಂಕಟಸುಬ್ಬಯ್ಯನವರು ಸರ್ವಾನುಮತದಿಂದ ಅಯ್ಕೆಯಾಗಿದ್ದಾರೆ. ಡಿ.೨೪ ರಿಂದ ೨೬ರ ರವರೆಗೆ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನೆಡೆಯಲಿರುವ ಸಮ್ಮೇಳನಕ್ಕೆ ಅದ್ಯಕ್ಷರ ಹುದ್ದೆಗೆ ಸೂಕ್ಥ ವ್ಯಕ್ತಿಯನ್ನು ಅಯ್ಕೆ ಮಾಡುವ ಮೂಲಕ ಸಮ್ಮೇಳನ ಸಮಿತಿ ಕನ್ನಡ ಹಬ್ಬದ ಸಂತಸವನ್ನು ಇನ್ನಷ್ಟು ಹೆಚ್ಚಿಸಿದೆ. ನಡೆದಾಡುವ ವಿಶ್ವಕೋಶ , ಶಬ್ದ ಬ್ರಹ್ಮ ಎಂದೇ ಖ್ಯತರಾದ ಪ್ರೋ, ಜಿ, ವೆಂಕಟಸುಬ್ಬಯ್ಯನವರು  ಮೂಲತಃ ಮಂಡ್ಯಜಿಲ್ಲೆಯ ಶ್ರೀರಂಗ ಪಟ್ಟಣದ ಬಳಿಯ ಗಂಜಾಂ ನವರಾಗಿದ್ದು ಕನ್ನಡ ಸಂಸೃತ ವಿದ್ವಾಂಸ ಗಂಜಾಂ ತಿಮ್ಮಯ್ಯ ನವರ ಮಗನಾದ ಇವರು ೧೯೧೩ರಲ್ಲಿ ಜನಿಸಿದರು . ಮೈಸೂರು ಮಹಾರಾಜರ ಕಾಲದಲ್ಲು ಸ್ವರ್ಣಪದಕದೊಡನೆ ಎಂ,ಎ ಪದವಿ ಪಡೆದ ಪ್ರೋ, ಜಿ, ವೆಂಕಟಸುಬ್ಬಯ್ಯನವರು  ಬಳಿಕ ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ , ವಿಭಾಗ ಮುಖ್ಯಸ್ತರಾಗಿ ಸೇವೆ ಸಲ್ಲಿಸಿದ್ದಾರೆ.
   ಕನ್ನಡನಾಡುತಂಡ ಈ ಅತ್ಯತ್ತಮ ಬಾಷಾ ತಗ್ನನ ಅಯ್ಕೆಗೆ ಕಿಂಚುತ್ತು ವಿರೋದ ವ್ಯಕ್ತಪಡಿಸಲಿಲ್ಲ ಎಂಬುದು ಅತಿಷಯವೇನಲ್ಲ, ಏಕೆಂದರೆ ವಿದ್ಯ, ವಿದ್ವತ್ತು, ಪ್ರತಿಬೆ ಜೊತೆಗೆ ವಿನಯಶಿಲತೆ ಮೈತುಂಬಿಸಿಕೊಂಡಿರುವ ಪ್ರೋ, ಜಿ, ವೆಂಕಟಸುಬ್ಬಯ್ಯನವರುದು ಸಾರಸ್ವ ಲೋಕದ ಅಪರೂಪದ ವ್ಯಕ್ತಿತ್ವ. ಹಳೆಯ ತಲಾಮಾರಿನ ಈ ಹಿರಿಯರ ಚಿಂತನೆ ಮಾತ್ರ ನಿರಂತರ ಬದಲಾವಣೆಗೆ ಒಡ್ಡಿಕೊಂಡಿರುವುದು ಅವರ ಅನೇಕ ಮಾತು,ಕೃತಿಗಳಿಂದಲೇ ಸ್ವಷ್ಟವಾಗುತ್ತದೆ. ಇವರೊಬ್ಬ ಉದಾರ ಮತ್ತು ವಿಚಾರವಾದಿಯಾದ ಭಾಷಾ ವಿಘ್ನಾನಿಯಾಗಿದ್ದು ಹಿರಿಯರು,ಕಿರಿಯರು ಎನ್ನದೆ ಎಲ್ಲರಿಗೊ ಅಪ್ತಾರಾಗಿದ್ದಾರೆ . ಶಿಕ್ಷಣ ಸಾಹಿತ್ಯ, ವಿಮರ್ಷೆ, ಬಾಷ ಸಂಶೋಧನೆ, ಹಿಗೇ ವಿವಿದ ಪ್ರಾಕಾರಗಳಲ್ಲಿ ಭಾಷ ಸಂಪತ್ತನ್ನು ವೃದ್ದಿಗೊಳಿಸಿದ ಇವರು ನೆಡೆದಾಡುವ ನಿಘಂಟು ಎಂದೆ ಖ್ಯಾತರಾಗಿದ್ದಾರೆ. ನಾಲ್ಕು ದಶಕಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಅಹರ್ನಿಸಿ ದುಡಿದು ಶಿಷ್ಯವೃಂದಕ್ಕೆ ಘ್ನಾನ ದಿವಿಗೆಯಾದ ಪ್ರೋ, ಜಿ, ವೆಂಕಟಸುಬ್ಬಯ್ಯನವರು  ನಿರಂತರ ಭಾಷ ಸಂಶೊಧನೆಯಲ್ಲಿ ತೊಡಗಿಸಿಕೊಂಡಿರುವುದರ ಪಲವೇ ಈ " ಅಮೂಲ್ಯ ನಿಘಂಟು"ಗಳು.
   ಅಖಿಲ ಭಾರತ ನಿಘಂಟು ಕಾರ್ಯ ಸಂಘಕ್ಕೆ ಅನೇಕ ವರ್ಷಗಳ ಕಾಲ ಉಪಾದ್ಯಕ್ಷರಾಗಿದ್ದ ಪ್ರೋ, ಜಿ, ವೆಂಕಟಸುಬ್ಬಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿನ ಬೃಹತ್ ನಿಘಂಟಿನ ಪ್ರದಾನ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಇವುಗಳಿಂದಗಿ ಇಂದು ಕನ್ನಡ ಭಾಷ ಸಂಪತ್ತು. ವಿಪುಲವಾಗಿದೆ. ಕನ್ನಡ ಅದ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆಂದು ಆರಂಭವಾದ ಇವರ "ಇಗೋ ಕನ್ನಡ" ಅಂಕಣ ಕ್ರಮೇಣ ಜನಸಾಮನ್ಯರ ಆಸಕ್ತಿಯನ್ನು ಉತ್ತೇಜಿಸಿತು . ಪತ್ರಿಕೆಗೆ ಹಾಗು ಪ್ರೋ, ಜಿ, ವೆಂಕಟಸುಬ್ಬಯ್ಯನವರಿಗೆ ಬರುತ್ತಿದ್ದ ಪ್ರಶ್ನೆಗಳು ಅದಕ್ಕೆ ಸಾಕ್ಷಿಯಾಗಿವೆ . ಕನ್ನಡ ಭಾಷೆ ಹಾಗು ಪದಗಳ ಉತ್ಪತ್ತಿಯ ವಿವರ ತಿಳಿಯಬಯಸುವ ಅನೇಕ ಅನೇಕ ಜನಸಾಮನ್ಯರ ಆಸಕ್ತಿಕಂಡು ಪ್ರೋ, ಜಿ, ವೆಂಕಟಸುಬ್ಬಯ್ಯನವರು ವಿಸ್ಮಯಗೊಂಡಿದ್ದರು. ಈಗ "ಇಗೋ ಕನ್ನಡ " ಪುಸ್ತಕ ರೂಪದಲ್ಲಿ ನಾಡಿನ ಮನೆಮನೆಗಳಲ್ಲಿ ಬೆಳಗುತ್ತಿರುವುದು ಪ್ರೋ, ಜಿ, ವೆಂಕಟಸುಬ್ಬಯ್ಯನವರ ಜನಪ್ರಿಯತೆಗೊಂದು ನಿದರ್ಶನವಾಗಿದೆ. ಕನ್ನಡ ಭಾಷ ಬೆಳವಣಿಗೆಗೆ ಹಾಗು ಕೆಲೆವೆಡೆ ಕನ್ನಡ ಬಳುಸುತ್ತಿರುವ ಬಗೆಗೆ ಅವರು ಹಾಗಾಗ್ಗೆ ನೀಡಿರುವ ಅಬಿಪ್ರಾಯಗಳು ಅವರ ಕಾಳಜಿಯನ್ನು ಎತ್ತಿ ತೊರಿಸುತ್ತದೆ ಕನ್ನಡ ಆಡುಮಾತಿನಲ್ಲಿ ಪ್ರಾಸರ ಮಾದ್ಯಮಗಳಲ್ಲಿ ಅಗುತ್ತಿರುವ ತಪ್ಪುಗಳು ಭಾಷೆಗೆ ಗೌರವ ತರುವಂತದ್ದಲ್ಲ ಎಂಬ ಎಚ್ಚರಿಕೆಯ ನುಡಿಗಳು ಇವೆ. ಸರ್ಕಾರದ ಪ್ರಕಟಣೆ, ಪತ್ರವ್ಯವಹಾರ, ಪ್ರಸಾರ ಮಾದ್ಯಮಗಳಲ್ಲಿ ಸರಳ ಕನ್ನಡ ಉಪಯೋಗಕ್ಕಾಗಿ ಅಂದೋಲನ ನಡೆಯಬೇಕೆನೊ ಎಂಬ ಮಾತು ಇಂದಿಗೂ ಧಿಟ. ಕಂಪ್ಯೂಟರ ಭಾಷೆಯನ್ನು ಕನ್ನಡಕ್ಕೆ ಅನುವಾದ ಮಾಡಬೇಕೆ ಅಥವಾ ನೇರ ಬಳಕೆ ಉಚಿತವೇ ಎಂಬ ವ್ಯಾಪಕ ಚರ್ಚೆಗೆ ಇದು ಸೂಕ್ತ ಸಮಯವಾಗಿದೆ. ನಾವಂತು ಕನ್ನಡಕ್ಕೆ ಹೊಂದುವ ಯಾವ ಶಬ್ದವನ್ನಾದರು ನೇರವಾಗಿ ಅಮದು ಮಾಡಿಕೊಳ್ಳಲು ಸಿದ್ದರಿದ್ದೆವೆ ಎಂದು ಹೇಳುವ  ಪ್ರೋ, ಜಿ, ವೆಂಕಟಸುಬ್ಬಯ್ಯನವರು ನಾವು ಖಂಡಿತ ಹಳೆಪೀಳಿಗೆಯವರೆಂದು ಭಾವಿಸುವುದು ತಪ್ಪಾಗುತ್ತದೆ. ಕನ್ನಡಕ್ಕೆ ಹೊಸದೊಂದು ಅಧುನುಕ ಕನ್ನಡ ವ್ಯಾಕರಣ ನಿರ್ಮಾಣ ಮಾಡ ಬೇಕೆಂಬ ಅಗತ್ಯವಿದೆ ಎಂಬ ತುಡಿತವೂ ಅವರಲ್ಲಿದೆ ಭಾಷೆ ನಿರಂತರವಾಗಿ ಬೆಳೆಯಬೇಕಾದರೆ ಅದಕ್ಕೆ ಯಾವುದೆ ಚೌಕಟ್ಟಿನ ಅವಶ್ಯಕತೆ ಇಲ್ಲ ಅನ್ಯದೇಶ ಶಬ್ದಗಳು ಕನ್ನಡ ಭಾಷೆಯ ವ್ಯಾಪ್ತಿಯನ್ನು ವಿಸ್ತರಗೊಳಿಸುತ್ತವೆ ಎನ್ನುವ ಪ್ರೋ, ಜಿ, ವೆಂಕಟಸುಬ್ಬಯ್ಯನವರನ್ನು ನವಯುಗಕ್ಕೆ ಹೊಂದಿಕೊಳ್ಳುವ ಉತ್ತಮ ವಿಶಿಷ್ತ ವ್ಯಕ್ತಿ ಎಂದು ಪರಿಗಣಿಸಿದರೆ ತಪ್ಪಾಗಲಾರದು.

 SATISH N GOWDA

ಈ ಸರ್ಕಾದಲ್ಲಿ ಶಾಸಕರೇ ಲಂಚ ನೀಡಬೇಕು.

ಈ ಸರ್ಕಾದಲ್ಲಿ ಶಾಸಕರೇ ಲಂಚ ನೀಡಬೇಕು.

            ಎಲ್ಲಿಗೆ ಬಂತು ಯಡಿಯೂರಪ್ಪ ನೇತ್ರತ್ವದ ಬಿಜೆಪಿ ಸರ್ಕಾರ. ಈ ಸರ್ಕಾರದಲ್ಲಿ ಕೆಲಸಗಳಾಗಬೆಕೆಂದರೆ ಜನಸಾಮನ್ಯರು ಅಧಿಕಾರಿಗಳಿಗೆ ಲಂಚ ನೀಡುವುದು ಸರ್ವೇಸಾಮನ್ಯ ಗುತ್ತಿಗೆದಾರರು ಸಹ ಎಲ್.ಒ.ಸಿ ಪಡೆಯಲು ಶೇಕಡ ನೀಡುವುದು ಸರ್ಕಾರಿ ನಿಯಮದಷ್ಟೆ ಖಡ್ಡಾಯವಾಗಿದೆ ಕರ್ನಾಟಕ ಇತಿಹಾಸದಲ್ಲಿ ಇದೆಂದು ಕೇಳರಿಯ ದಷ್ಟು ಬ್ರಷ್ಟ ಸರ್ಕಾರ ಇದಾಗಿದ್ದು ಮುಖ್ಯಮಂತ್ರಿ ಮತ್ತು ಅವರ ಸಹ್ಯೋದ್ಯಗಿ ಸಚಿವರುಗಳ ಮಕ್ಕಳೆ ಭೂ ಹಗರಣ ಮತ್ತು ಇನ್ನಿತರ ಕರ್ಮಕಾಂಡಗಳಲ್ಲಿ ಸಿಕ್ಕಿಹಾಕಿಕೊಂಡಿರುವುದು ಈಗಾಗಲೆ ಮಾದ್ಯಮಗಳ ಮೂಲಕ ತಿಳಿದುಕೊಂಡಿರುವುದು ಸರಿಅಷ್ಟೆ. ಆದರೆ ಇನ್ನೊಂದು ವಿಚಿತ್ರವೆಂದರೆ ಜನಸಾಮನ್ಯರು ಮಾತ್ರವಲ್ಲದೆ ಜನಪ್ರತಿನಿದಿಯಾದ ಶಾಸಕರೆ ಲಂಚಕೊಟ್ಟು ಕೆಲಸ ಮಾಡಿಸಿಕೊಳ್ಳುಬೇಕಾದ ದುಸ್ಥಿತಿ ಒದಗಿಬಂದಿರುವುದು ಖೇದಕರ ಸಂಗತಿಯಾಗಿದೆ . ಈ ವರದಿಯ ಕೇಂದ್ರಬಿಂದುವಾದ ಮಂಡ್ಯಜಿಲ್ಲೆಯ ನಾಗಮಂಗಲ ಕ್ಷೇತ್ರದ ಶಾಸಕರಾದ ಕೆ,ಸುರೇಶ್ ಗೌಡ ತಮ್ಮಕ್ಷೇತ್ರಕ್ಕೆ ಅನುದಾನತರಲು ಸಂಬಂದ ಪಟ್ಟ ಇಲಾಖೆಯ ಸಚಿರೊಬ್ಬರ ಅಪ್ತರಿಗೆ ಲಂಚನೀಡಿರುವುದಾಗಿ ತಿಳಿಸುವುದರ  ಮೂಲಕ ಒಂದು ಹೊಸ ಬಾಂಬ ಸಿಡಿಸಿದ್ದಾರೆ . ಬಿಜೆಪಿ ನೇತ್ರ‍ತ್ವದ ಸರ್ಕಾರದಲ್ಲಿ  ಲಂಚನೀಡಿದರೆ ಮಾತ್ರ ಕೆಲಸ ಕಾರ್ಯಗಳು ಸಲೀಸಾಗಿ ನೆರವೇರುತ್ತವೆ ಎಂದು ಪತ್ರಿಕಾ ಘೋಷ್ಟಿಯಲ್ಲಿ ಬಹಿರಂಗ ಹೇಳಿಕೆ ನೀಡುವುದರ ಮೂಲಕ ಸರ್ಕಾರವನ್ನು ಪೇಚಿಗೆ ಸಿಲುಕಿಸುದ್ದಾರೆ.
  ಮೂರ್ನಾಲ್ಕು ದಿನಗಳ ಹಿಂದೆಯಷ್ಟೆ ಮಂಡ್ಯ ಜಿಲ್ಲೆಯ ಸಂಸದರಾದ ಎನ್, ಚಲುವರಾಯಸ್ವಾಮಿ ಅನುದಾನ ಬಿಡುಗಡೆಗಾಗಿ ಜೆಲ್ಲೆಯ ಶಾಸಕರೊಬ್ಬರು ಸಚಿವರೊಬ್ಬರಿಗೆ ಐದುಲಕ್ಷ ರೂ ಲಂಚ ನೀಡಿದ್ದಾರೆ ಎಂದು ಹೇಳಿಕೆ ನೀಡಿದ್ದರಾದರೂ ಲಂಚ ನೀಡಿದ್ದ ಶಾಸಕ ಮತ್ತು ಲಂಚಪಡೆದ ಸಚಿವರ ಹೆಸರನ್ನು ಅವರು ಬಹಿರಂಗ ಪಡಿಸಿರಲಿಲ್ಲವಾದರು ಈ ಹೇಳಿಕೆ ಬಳಿಕ ಎಲ್ಲರ ಚಿತ್ತ ಸುರೇಶ್ ಗೌಡರತ್ತ ನೆಟ್ಟಿತ್ತು ಅವರೀಗ ಲಂಚ ನೀಡಿರುವ ಶಾಸಕ ತಾನೆ ಎಂದು ಒಪ್ಪಿಕೊಳ್ಳುವ ಮೂಲಕ ಚಲುವರಾಯಸ್ವಾಮಿ ಹೇಳಿಕೆಗೆ ಪುಷ್ಟಿನೀಡಿದ್ದಾರೆ ಆದರೆ ಲಂಚಪಡೆದ ಸಚಿವಮಹಾಶೆಯನ ಹೆಸರನ್ನು ಶಾಸಕರು ಸಹ ಬಹಿರಂಗ ಪಡಿಸದೆ ನಿಗೂಡವಾಗಿಟ್ಟಿರುವುದು ಎಲ್ಲರಲ್ಲು ಕುತೂಹಲವನ್ನು ಎಬ್ಬಿಸಿದೆ.
        ಶಾಸಕ ಸುರೇಶ್ ಗೌಡರು ಇದೊಂದು ನಾಚಿಕೆಗೇಡಿನಸಂಗತಿಯಾಗಿದ್ದು ಲಂಚ ನೀಡುವುದು ತಪ್ಪೆಂದು ನನಗೂ ಗೊತ್ತು , ಆದರೆ ಅನಿವಾರ್ಯ ಇದಕ್ಕಾಗಿ ನನಗೆ ನಾಚಿಕೆಯಾಗುತ್ತಿದೆ ಇಂತಹ ಕೆಟ್ಟ ಸರ್ಕಾರದಲ್ಲಿ ನಾನು ಶಾಸಕನಾಗಿರುವುದಕ್ಕೆ ನೊವುಂಟಾಗಿದೆ ಕೇವಲ ಒಂದೆರಡು ಲಕ್ಷವಲ್ಲ , ಲಕ್ಷಾಂತರ ರೂಗಳನ್ನು ಸಂಬಂಧಪಟ್ಟ ಇಲಾಖೆಯ ಸಚಿವರ ಆಪ್ತರಿಗೆ ನೀಡಿ ಕಾಮಗಾರಿಗಳನ್ನು ಮಾಡಿಸಿಕೊಂಡು ಅನುದಾನ ತಂದಿದ್ದೆನೆ ತನ್ನ ಕ್ಷೇತ್ರದ ಅಬಿವೃದ್ದಿಗೆ ಅಡ್ಡಿಯಾಗಬಾರದೆಂಬ ಹಿನ್ನಲೆಯಲ್ಲಿ ಆ ಸಚಿವರ ಹೆಸರನ್ನು ಸದ್ಯಕ್ಕೆ ಬಹಿರಂಗ ಪಡಿಸಲಾರೆ ಸಮಯ ಬಂದಾಗ ಎಲ್ಲವನ್ನು ಜನರ ಮುಂದೆ ಇಡುತ್ತೆನೆ.
        ಯಾವ ಸಚಿವರು ನೇರವಾಗಿ ಲಂಚದ ಹಣ ಪಡೆಯುವುದಿಲ್ಲ ಎಲ್ಲಾ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ಅವರವರ ಏಜಂಟರಿರುತ್ತಾರೆ . ಅವರುಗಳ ಮೂಲಕ ಸಂಬಂಧಪಟ್ಟವರಿಗೆ ಹಣ ರವಾನೆಯಾಗುತ್ತದೆ ಆದರೆ ಇಂತಹ ಪ್ರಕ್ರಿಯೆಯಲ್ಲಿ ಬಲಿಪಶುಗಳಾಗುತ್ತಿರುವವರು ಮಾತ್ರ ಜನಸಾಮನ್ಯರು ಮತ್ತು ನಮ್ಮಂತಹವರು ಮಾತ್ರ. ಆದ್ದರಿಂದ ಈ ಸರ್ಕಾರದಲ್ಲಿ ನೆಡೆಯುತ್ತಿರುವ ಬ್ರಷ್ಟಾಚಾರ ಮತ್ತು ಅವ್ಯವಹಾರಗಳ ಬಗ್ಗೆ ರಾಜ್ಯಪಾಲರು ಮತ್ತು ಲೋಕಾಯುಕ್ತರಿಗೆ ಈಗಾಗಲೆ ದೂರು ನೀಡಿದ್ದು ಅವರು ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತಾರೆ ಎನ್ನುವುದರ ಆಧಾರದ ಮೇಲೆ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ದಪಡಿಸುತ್ತೆವೆಂದು ತಿಳಿಸಿದ್ದಾರೆ.
 ಈಶ್ವರಪ್ಪ ತೀಕ್ಷ್ಣ ಪ್ರತಿಕ್ರಿಯೆ.
ಬಿಜೆಪಿಯ ರಾಜ್ಯದ್ಯಕ್ಷರಾದ ಈಶ್ವರಪ್ಪ ಲಂಚನೀಡಿರುವ ಶಾಸಕನ ಬಂದನಕ್ಕೆ ಒತ್ತಾಯ ಮಾಡಿದ್ದಾರೆ ತಮ್ಮ ಕ್ಷೇತ್ರಕ್ಕೆ ಅನುದಾನ ತರಲು ಸಚಿವರೊಬ್ಬರಿಗೆ ಲಂಚನೀಡಿರುವುದಾಗಿ ಹೇಳಿರುವ ನಾಗಮಂಗಲ ಶಾಸಕ ಸುರೇಶ್ ಗೌಡನನ್ನು ತಕ್ಷಣವೇ ಬಂದಿಸಬೇಕೆಂದು ಈಶ್ವರಪ್ಪ ಹೇಳಿದ್ದಾರೆ. ಲಂಚ ನೀಡುವುದು ಮತ್ತು ತೆಗೆದುಕೊಳ್ಳುವುದು ಎರಡು  ಕಾನೂನು ಬಾಹಿರ ಎಂಬುದು ಗೊತ್ತಿದ್ದರು ಸಹ ಸುರೇಶ್ ಗೌಡರು ಲಂಚ ನೀಡಿರುವುದಾಗಿ ಸ್ವತಃ ತಾವೆ ಹೇಳಿಕೊಂಡಿರುವುದರಿಂದ ಅವರನ್ನು ತಕ್ಷಣವೆ ಬಂದಿಸಬೇಕೆಂದು ಗೃಹ ಸಚಿವರಲ್ಲಿ ಮನವಿ ಮಾಡಿಕೊಂಡಿದ್ದೆನೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.
    ಲಂಚ ನೀಡಿರುವುದು ಯಾರಿಗೆ ? ಮತ್ತು ಯಾರು ತೆಗೆದುಕೊಂಡಿರುತ್ತಾರೆ ಎನ್ನುವುದರ ಬಗ್ಗೆ ಕೋಲಂಕುಶ ತನಿಖೆ ನೆಡೆದ ನಂತರ ತಪ್ಪಿತಸ್ಥರ ವಿರುದ್ದ ಸೂಕ್ಥಕ್ರಮ ತೆಗುದುಕೊಳ್ಳಲಾಗುವುದು ಎಂದು ಹೇಳಿಕೆ ನೀಡಿದ್ದಾರೆ. ಆದರೆ ಆಷ್ಟೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಶಾಸಕ ಸುರೇಶ್ ಗೌಡ ದೈರ್ಯವಿದ್ದರೆ ನನ್ನನ್ನು ಬಂದಿಸಲಿ ಎನ್ನುವ ಮೂಲಕ ಸರ್ಕಾರಕ್ಕೆ ಸವಾಲು ಒಡ್ಡಿದ್ದಾರೆ. ಲಂಚ ನೀಡಿದ ಆರೋಪದ ಹಿನ್ನಲೆಯಲ್ಲಿ ತಮ್ಮನ್ನು ಬಂದಿಸುವಂತೆ ಬಿಜೆಪಿ ರಾಜ್ಯದ್ಯಕ್ಷ ಕೆ,ಎಸ್ ಈಶ್ವರಪ್ಪ ಆದೇಶಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸುರೇಶ್ ಗೌಡ ಈ ಸರ್ಕಾರಕ್ಕೆ ಸತ್ಯ ಹೇಳುವುದೆ ಅಪತ್ಯ ಎಂದು ಚೇಡಿಸಿದ್ದಾರೆ. ಯಡಿಯೂರಪ್ಪ ನೇತ್ರತ್ವದ ಬಿಜೆಪಿ ಸರ್ಕಾರ ಲಂಚಗುಳಿತನ ಜಗತ್ ಜಾಹಿರಾಗಿದ್ದು, ಇದೊಂದು ಬ್ರಷ್ಟ ಸರ್ಕಾರ ಎನ್ನುವುದು ರಾಜ್ಯದ ಜನಸಾಮನ್ಯರಿಗೆ ಗೊತ್ತಿರುವ ಸಂಗತಿಯಾಗಿದ್ದು ತಾವು ಹೇಳಿಕೆ ನೀಡುರುವುದರಲ್ಲ ಯಾವುದೆ ರೀತಿಯ ತಪ್ಪಿಲ್ಲ ಎಂದು ಸಮರ್ತಿಸಿಕೊಂಡಿದ್ದಾರೆ. ಶಾಸಕರೇ ಲಂಚಕೊಟ್ಟು ಕೆಲಸ ಮಾಡಿಸಿಕೊಳ್ಳ ಬೇಕಾದ ಸ್ಥಿತಿ ಈ ಹಿಂದಿನ ಯಾವಸರ್ಕಾರದಲ್ಲೂ ಇರಲಿಲ್ಲ  . ಬಹುಶಃ ಮುಂದೆಯೂ ಬರಲಾರದು ಎಂದು ತೀಕ್ಷ್ಣವಾಗಿ ಹೇಳಿದ್ದಾರೆ. 


 SATISH N GOWDA